Thursday, May 5, 2011

ಅಜ್ಜನ ನೆನಪಿನಲ್ಲಿ - ಕೊಳಲು ನಾದದ ಒಂದು ಸಂಜೆ.

೨೦೧೧ ಮೇ 7 ಕ್ಕೆ ನನ್ನ ಅಜ್ಜ ’ಸುಬ್ರಾಯ ಗಣಪಯ್ಯ ಮಳಲಗಾಂವ’ ಇವರ ಸ್ಮರಣಾರ್ಥ ಒಂದು ಬಾನ್ಸುರಿ ಜುಗಲ್ಬಂದಿ ಕಾರ್ಯಕ್ರಮವನ್ನು, ಕವಡೀಕೆರೆ ದೇವಸ್ಥಾನದ ಆವರದಲ್ಲಿ ಆಯೋಜಿಸಿದ್ದೆವು.

ಕವಡೀಕೆರೆ ಒಂದು ಅದ್ಭುತವಾದ ಪಾರಿಸರಿಕ ಸೌಂದರ್ಯದ ಸ್ಥಳ. ಪಕ್ಕದಲ್ಲಿ ವಿಶಾಲವಾದ ಕೆರೆ, ಇನ್ನೊಂದೆಡೆ ಅಡಿಕೆಯ ತೋಟ, ಇತ್ಯಾದಿ. ಅದಕ್ಕೆ ಎಲ್ಲರಿಗೂ ಸುಂದರ ಪರಿಸರದ ಮಡಿಲಲ್ಲಿ ಸಕ್ಕರೆಯ ಪಾನಕದಂಥಾ ಕೊಳಲಿನ ನಾದದ ಜುಗಲ್ಬಂದಿಯನ್ನು ಕೇಳುವ ಸದವಕಾಶ ಸೃಷ್ಟಿಯಾಗಿತ್ತು.

ಸಮೀರ್ ರಾವ್ - ಭುವನೇಶ್ವರ ಹಾಗೂ ಕಿರಣ ಹೆಗಡೆ ಮುಂಬೈ ಇವರೀರ್ವರ ಬಾನ್ಸುರಿಯ ನಾದಕ್ಕೆ ಗುರುಮೂರ್ತಿ ವೈದ್ಯ ಅವರ ತಬಲಾ ಸಾಥ್ ನೀಡಿದರು. ಸುಮಾ ತಂಬೂರಿ ಸಹಕಾರ ನೀಡಿದರು. ಭೂಪಾಲಿಯೊಂದಿಗೆ ಶುರುವಾದ ಕೊಳಲಿನ ದನಿ, ಜೋಗ್ ರಾಗ, ಪಿಲೂ, ಹಾಗೂ ರಾಮಭಜನೆ, ಆರತಿ ಭಜನೆಗಳೊಂದಿಗೆ ಮುಕ್ತಾಯವಾಯಿತು. 500ಕ್ಕೂ ಮಿಗಿಲಾಗಿ ಸೇರಿದ್ದ ಜನರು ಕಾರ್ಯಕ್ರಮದ ಕೊನೆಯವರೆಗೂ ಆಲಿಸಿದರು. ಕರ್ಣಾನಂದಕರವಾಗಿದ್ದ ಸಂಗೀತ ಜನರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಕಾರ್ಯಕ್ರಮವನ್ನು ಇಷ್ಟು ದೂರದ ಊರಿನಲ್ಲಿ ಕುಳಿತು ಆಯೋಜಿಸುವದು ಸುಲಭವಲ್ಲ. ಇದಕ್ಕೆಲ್ಲಾ ನನ್ನ ಮಿತ್ರವ್ರುಂದದ ಅಪಾರ ಸ್ನೇಹ, ನಂಬಿಕೆ, ಪ್ರೋತ್ಸಾಹ ಇತ್ಯಾದಿಗಳೇ ಕಾರಣ ಎನ್ನಬಹುದು. ಕಲಾವಿದರುಗಳಾದ ಸಮೀರ ರಾವ್,ಕಿರಣ ಹೆಗ್ಡೆ, ಗುರುಮೂರ್ತಿ ವೈದ್ಯ, ಮುಂಡಗೋಡಿಮನೆ ಶ್ರೀಪತಿ ಭಟ್, ಈಶ್ವರ್ ಭಟ್, ಗುರ್ತೆಗದ್ದೆ ಸುಬ್ರಹ್ಮಣ್ಯ ಭಟ್, ಲಕ್ಷ್ಮೀನಾರಾಯಣ ಭಟ್ ಇವರೆಲ್ಲರುಗಳ ಪ್ರೀತಿಯನ್ನು ಹಾಗೂ ಪ್ರೋತ್ಸಾಹಗಳನ್ನು ನಾನೆಂದೂ ಮರೆಯಲಾರೆ.

Audio Recording of this concert is here http://www.esnips.com/web/Sameer-Kiran-jugalbandi

5 comments:

Kanthi said...

All the best.. kaaryakrama chanaagaagli anta haaraisti..

Ambika said...

Kaaryakrama cholo aagali :)
Eshtu dodda aasti iddu ninna hatra ..nijavaglu lucky..

Satish MR said...

ಧನ್ಯವಾದಗಳು...:)

ವಾಣಿಶ್ರೀ ಭಟ್ said...

nimma prayatna shlaghaneeya.. biduvinalli nanna blogigomme banni :)

Aakash Ganapathy said...

Lo Sathisha, Ninna Barahagala jeninalli mullugi Nanna medhulu Hasi Hasi yennithu...